Article Ads 1

ದಕ್ಷಿಣ ಕನ್ನಡ ಪ್ರಾಂತ್ಯದ ಹವ್ಯಕ ಭಾಷೆಯ ಗಾದೆಗಳು

ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ?
ಕುಂಡೆಗೆ ಹೆಟ್ಟಿ ಹಲ್ಲು ಉದುರ್ಸುಲೇ ಎಡಿಯ
ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಪ್ರಯೋಜನಕ್ಕೆ ಬತ್ತು
ಪರವೂರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ಅಕ್ಕು
ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ
ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು
ಹಳೆ ಮನೆ ಪಾಪದೆ ಬೇಡ ,ಹೊಸ ಮನೆ ಪುಣ್ಯದೆ ಬೇಡ
ಕಂಜಿ ಹಾಕಿರೆ ಸಾಲ, ನಕ್ಕುಲೂ ಅರಡಿಯಕ್ಕು
ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಗೆ ಆಗ!
ತಲೆಲಿ ಬರದ್ದರ ಎಲೆಲಿ ಉದ್ದುಲೆ ಎಡಿಯ
ಕೇರೆ ತಿಂಬ ಊರಿಂಗೆ ಹೋದರೆ ನಡು ತುಂಡು ತಿನ್ನಕ್ಕು
ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ
ಸೀವಿದ್ದು ಹೇಳಿ ಬೇರಿನವರೆಗೆ ಅಗಿವಲಾಗ
ವಾಸನೆ ಬರಲೇಳಿ ಸಗಣನೀರು ಹಾಕಿದ್ದು ಶುದ್ದಾತು
ಆನೆ ಹೋಪಗಳೂ ಗಂಟೆ ಕಟ್ಟಕ್ಕಾವುತ್ತು
ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ
ತನ್ನಿಚ್ಛೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ
ಬೆಂದಷ್ಟು ಸಮಯ ತಣಿವಲಿಲ್ಲೆ
ಮುಂದಣ ಎಮ್ಮೆಯ ಪಚ್ಚೆಯ ನೋಡಿ ಹಿಂದಣ ಎಮ್ಮೆ ನೆಗೆ ಮಾಡಿತ್ತಡ.
ಒಂದು ರಚ್ಚೆಂದ ಬಿಡ ಒಂದು ಗೂಂಜಿಂದ ಬಿಡ
ಸ್ವರ್ಗದ ಬಾಗಿಲಿಲಿ ನರಕದ ನಾಯಿ
ಮೂಲೆಲಿದ್ದ ಮಡುವಿನ ಕಾಲಿಂಗೆಳದು ಹಾಕಿಕೊಂಡ ಹಾಂಗೆ


Post a Comment

0 Comments

Article Ads 3